Message: Return type of CI_Session_files_driver::open($save_path, $name) should either be compatible with SessionHandlerInterface::open(string $path, string $name): bool, or the #[\ReturnTypeWillChange] attribute should be used to temporarily suppress the notice
Message: Return type of CI_Session_files_driver::close() should either be compatible with SessionHandlerInterface::close(): bool, or the #[\ReturnTypeWillChange] attribute should be used to temporarily suppress the notice
Message: Return type of CI_Session_files_driver::read($session_id) should either be compatible with SessionHandlerInterface::read(string $id): string|false, or the #[\ReturnTypeWillChange] attribute should be used to temporarily suppress the notice
Message: Return type of CI_Session_files_driver::write($session_id, $session_data) should either be compatible with SessionHandlerInterface::write(string $id, string $data): bool, or the #[\ReturnTypeWillChange] attribute should be used to temporarily suppress the notice
Message: Return type of CI_Session_files_driver::destroy($session_id) should either be compatible with SessionHandlerInterface::destroy(string $id): bool, or the #[\ReturnTypeWillChange] attribute should be used to temporarily suppress the notice
Message: Return type of CI_Session_files_driver::gc($maxlifetime) should either be compatible with SessionHandlerInterface::gc(int $max_lifetime): int|false, or the #[\ReturnTypeWillChange] attribute should be used to temporarily suppress the notice
ಇಂದು ವಿಜ್ಞಾನ ಎಷ್ಟು ಪ್ರಗತಿ ಹೊಂದಿದೆ ಅಂದರೆ ಮಂಗಳ ಗ್ರಹದಲ್ಲಿ ಆಗುತ್ತಿರುವ ಕ್ಯಾಂಪಿಂಗ್ ನಿಂದ ಹಿಡಿದು
3ಡಿ ಪ್ರಿಂಟಿಂಗ್ ವರೆಗೂ ತಂತ್ರಜ್ಞಾನ ಪ್ರಗತಿ ಹೊಂದಿದೆ, ಪರಿವರ್ತನೆಯ ಒಂದು ಅಲೆ ಪ್ರಪಂಚವನ್ನು
ಬದಲಿಸುತ್ತಿದೆ. ಸಂಪೂರ್ಣ ಜಗತ್ತು ಪ್ರಗತಿ ಹೊಂದಿದರು ಕೂಡ ಕೃಷಿ ಜಗತ್ತು ಮಾತ್ರ ಅರ್ಥಪೂರ್ಣವಾದ ಪರಿವರ್ತನೆಗೆ
ಕಾಯುತ್ತಲೆ ಇದೆ. ಎಷ್ಟು ಉದ್ಯೋಗಗಳನ್ನು ಬದಲಿಸುತ್ತಿರುವ ಆಧುನಿಕ ತಾಂತ್ರಿಕತೆಗಳು ನಮ್ಮ ಭಾರತದ ರೈತರಿಗೆ
ಇಲ್ಲಿಯವರೆಗೂ ಪರಿಚಯವೇ ಆಗಿಲ್ಲ. ಅದಕ್ಕಾಗಿಯೇ ನಾವು ಭಾರತದ ಕೃಷಿಯ ರೂಪ ಬದಲಿಸಲು ಮತ್ತು ನಮ್ಮ ದೇಶ
ಹಾಗು ನಮ್ಮ ರೈತರ ಆಧಾರಕ್ಕಾಗಿ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ದೃಢ ನಿರ್ಧಾರಕ್ಕೆ ಬಂದಿದ್ದೇವೆ. ನಾವು
ಪರಿವರ್ತನೆಯ ಒಂದು ಪರಿಸರಾತ್ಮಕ ತಂತ್ರಜ್ಞಾನವನ್ನು ರಚಿಸಿದ್ದೇವೆ, ಇದನ್ನ ಒಂದು ಮಾಯೆ ಎನ್ನಬಹುದು ಆದರೂ
ಇದರಿಂದ ಬಹಳಷ್ಟು ವಾಸ್ತವಿಕ ಲಾಭಗಳಿವೆ. ಇದನ್ನು ನಾವು 'ಚಮತ್ಕಾರ ಅಲ್ಲ ಇದೊಂದು ಆವಿಷ್ಕಾರ' ಎಂದು
ಹೆಸರಿಟ್ಟಿದ್ದೇವೆ
ಕ್ರಿಶ್ - ಇ ಗೆ ನಿಮಗೆ ಸ್ವಾಗತ| ಲೆಕ್ಕವಿಲ್ಲದಷ್ಟು ಗಂಟೆಗಳು, ಲಕ್ಷಾಂತರ ಕೋಡಗಳು, ಸಾವಿರಾರು ಬ್ಲೂಪ್ರಿಂಟ್,
ಹಾಗೂ ಹಲವಾರು ಪರೀಕ್ಷೆಗಳನ್ನು ಮಾಡಿದ ನಂತರ ನಮಗೆ ಕ್ರಿಶ್ - ಇ ಆಪ್ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ಕ್ರಿಶ್ -
ಇ ಆಪ್ ಉಪಯೋಗಿಸಲು ಸುಲಭ, ದಕ್ಷತೆಯಿಂದ ಕೂಡಿದೆ, ಅತ್ಯಾಧುನಿಕ ಮತ್ತು ವೈಜ್ಞಾನಿಕವಾಗಿ ಮಾನ್ಯತೆ
ಹೊಂದಿದೆ. ಇದು ಟೆಕ್ನಾಲಜಿ ಮೇಲೆ ಆಧಾರಿತವಾಗಿದೆ ಆದರೆ ರೈತರ ಜೀವನದಿಂದ ಪ್ರೇರಣೆ ಹೊಂದಿದೆ. ಕ್ರಿಶ್ - ಇ ಆಪ್
ರೈತರ ಅವಶ್ಯಕತೆಗಳನ್ನು ಆಧರಿಸಿ ಪರಿಹಾರ ಮತ್ತು ಸೇವೆಗಳನ್ನು ಒದಗಿಸುತ್ತಿದೆ, ಇದರಿಂದ ರೈತರ ಪ್ರತಿ ಎಕರೆ
ಆದಾಯವನ್ನು ಹೆಚ್ಚಿಸುತ್ತದೆ. ಇದನ್ನು ಕೃಷಿ ಪರಿಸರದ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಮುಖ್ಯವಾಹಿನಿಗೆ ತರಲು
ಮತ್ತು ರೈತರ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.
ಕೃಷ್-e ಯೊಂದಿಗೆ ಅಭಿವೃದ್ಧಿಯನ್ನು ಸಾಧಿಸಿ
ಲಕ್ಷಾಂತರ ಸಂಖ್ಯೆಯ ವಿಜೇತ ರೈತರನ್ನು ಸೃಷ್ಟಿಸುವ ಯುಗವನ್ನು ಕೃಷ್-e ಆರಂಭಿಸುತ್ತದೆ
ಭಾರತೀಯ ಕೃಷಿಯನ್ನು ರೂಪಾಂತರಗೊಳಿಸಲು, ತಮ್ಮ ಹೊಲಗಳಿಂದ ಅತ್ಯುತ್ತಮ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಪಡೆದುಕೊಳ್ಳುವಂತೆ ಲಕ್ಷಾಂತರ ರೈತರನ್ನು ಸುಧಾರಿಸುವ ಗುರಿಯನ್ನು ಕೃಷ್-e ಹೊಂದಿದೆ.
ಕೈಲಾಸ್ ಮೋರೆ
ಗ್ರಾಮ - ಪೂರಿ
ಜಿಲ್ಲೆ - ಔರಂಗಾಬಾದ್
ಓರ್ವ ಕೃಷ್-e ತಾಂತ್ರಿಕತೆ ಪ್ಲಾಟ್ ರೈತರಾಗಿರುವ ಶ್ರೀಯುತ ಕೈಲಾಶ್ ಮೋರೆ ಇವರು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯವರಾಗಿದ್ದಾರೆ. 8 ತಿಂಗಳುಗಳ ಹಿಂದೆ, ತಮ್ಮ ಬೆಳೆಗಾಗಿ ಕೃಷ್-ಇ ಕಬ್ಬು ಬೆಳೆಯ ಡಿಜಿಟಲ್ ಕ್ಯಾಲೆಂಡರ್ ಅನ್ನು ಅವರು ಅಳವಡಿಸಿಕೊಂಡರು. ಕೃಷ್-e ಸಲಹೆ ಮತ್ತು ಆ್ಯಪ್ ಸಪೋರ್ಟ್ನ ನೆರವಿನೊಂದಿಗೆ, ಪ್ರಸ್ತುತದಲ್ಲಿ, ಅವರ ಕಬ್ಬಿನ ಬೆಳೆಯು 7.5 ಅಂಗುಲಗಳಷ್ಟು ಗಿಣ್ಣುಗಳ ಗಾತ್ರವನ್ನು ಮತ್ತು 3.5 ಅಂಗುಲಗಳಷ್ಟು ದಪ್ಪವನ್ನು ಹೊಂದಿದೆ. ಇದರ ಶ್ರೇಯವು ಉತ್ತಮ ಬೆಳೆ ನಿರ್ವಹಣಾ ಕ್ರಮಗಳಾದಂತಹ ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ ಮುಂತಾದವುಗಳಿಗೆ ಸಲ್ಲುತ್ತದೆ, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಸಾಗುವಳಿ ವೆಚ್ಚದಲ್ಲಿ 12% ಉಳಿತಾಯವನ್ನು ಮಾಡಲು ಅವರಿಗೆ ಇದು ನೆರವಾಗಿದೆ.
ಅಂಕುಶ್ ದೊಡ್ಮೀಸೆಗ್ರಾಮ – ಸಾದೊಬಾಚಿವಾಡಿ ಬಾರಾಮತಿ
ಜಿಲ್ಲೆ - ಪುಣೆ
ಪುಣೆಯ ಸಾದೊಬಾಚಿವಾಡಿ ಬಾರಾಮತಿ ಗ್ರಾಮದವರಾದ ಶ್ರೀ ಅಂಕುಶ್ ದೊಡ್ಮೀಸೆ ಇವರು ಓರ್ವ ಪ್ರಗತಿಪರ ರೈತರಾಗಿದ್ದು, ತಮ್ಮ ಬೆಳೆಗಳ ಆರೈಕೆಯನ್ನು ಮಾಡಲು ಕೃಷ್-e ಕಬ್ಬಿನ ಬೆಳೆಯ ಡಿಜಿಟಲ್ ಸಲಹೆಯನ್ನು ಬಳಸುತ್ತಾರೆ. ಇವರು ನಮ್ಮ ನಿಯತಕಾಲಿಕ ಚಟುವಟಿಕೆ ಗಳಾದಂತಹ ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ, ಹ್ಯೂಮಿಕ್ + ಫಾಸ್ಫರಿಕ್ ಆಮ್ಲದಿಂದ ಬೇರು ತೊಯ್ಯಿಸುವಿಕೆಗಳಂಥ (ಡ್ರೇನ್ಚಿಂಗ್) ಅನುಸರಿಸುತ್ತಿದ್ದು. ಈ ಎಲ್ಲ ತಾಂತ್ರಿಕತೆಗಳ ನೆರವಿನೊಂದಿಗೆ, ಪ್ರಸ್ತುತದಲ್ಲಿ ಸುಮಾರು 7-8 ರಷ್ಟು ಉತ್ತಮ ಸಂಖ್ಯೆಯ ಮೊಳಕೆಗಳನ್ನು ಅವರು ಪಡೆದುಕೊಂಡಿದ್ದಾರೆ ಅಂದರೆ ಸುಮಾರು 80% ವರೆಗೆ ಮೊಳಕೆಯೊಡೆಯುವಿಕೆಯನ್ನು ಇದು ಅವರಿಗೆ ನೀಡುತ್ತಿದೆ.
ದಾರಾ ಪ್ರತಾಪ್ ಸಿಂಗ್ ರಘುಬಂಶಿಗ್ರಾಮ - ಗ್ರೆತಿಯಾ
ಜಿಲ್ಲೆ - ಛಿಂದ್ವಾರಾ
ಮಧ್ಯ ಪ್ರದೇಶ ರಾಜ್ಯದ ಛಿಂದ್ವಾರಾ ಜಿಲ್ಲೆಯ ಗ್ರೆತಿಯಾ ತಾಲೂಕು, ಚೌರಾಯಿ ಗ್ರಾಮದವರಾದ ಶ್ರೀ ದಾರಾ ಪ್ರತಾಪ್ ಸಿಂಗ್ ರಘುಬಂಶಿ ಇವರು ಓರ್ವ ಪ್ರಗತಿಪರ ರೈತರಾಗಿದ್ದು, ಕೃಷ್-e ತಂಡದ ನೆರವಿನೊಂದಿಗೆ ಯಾಂತ್ರೀಕರಣ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ನ್ಯುಮ್ಯಾಟಿಕ್ ಪ್ಲ್ಯಾಂಟರ್ಗಳನ್ನು ಬಳಸಿರುವುದರಿಂದ ಸರಿಯಾದ ಬಿತ್ತನೆಯ ಆಳ, ಬೀಜದಿಂದ ಬೀಜದ ನಡುವಿನ ಹಾಗೂ ಸಾಲಿನಿಂದ ಸಾಲಿನ ನಡುವಿನನಿಖರ ಅಂತರವು. ಇದರ ಪರಿಣಾಮವಾಗಿ ಮೊಳಕೆಯೊಡೆಯುವಿಕೆಯ ಸಮಾನವಾಗಿದೆ ಹಾಗೂ ಹೈಬ್ರಿಡ್ ಗೋವಿನಜೋಳದ ಬೀಜೋತ್ಪಾದನೆಯ ವೆಚ್ಚಗಳು ಕಡಿಮೆಯಾಗಿವೆ.
ಹೇಮಂತ್ ವರ್ಮಾಗ್ರಾಮ - ಹತೋಡಾ
ಜಿಲ್ಲೆ - ಛಿಂದ್ವಾರಾ
ಇವರು ಹೇಮಂತ್ ವರ್ಮಾ. ಇವರು ಮಧ್ಯ ಪ್ರದೇಶದ ಹತೋಡಾ ಗ್ರಾಮದ ಓರ್ವ ಉತ್ತಮ ಪ್ರಗತಿಪರ ರೈತರಾಗಿದ್ದಾರೆ. ಕೃಷ್-e ತಂಡದ ನೆರವು ಮತ್ತು ಮಾರ್ಗದರ್ಶನದೊಂದಿಗೆ, ಭೂಮಿ ಸಿದ್ಧತೆ ಹಾಗೂ ಕೊಯ್ಲು ಮಾಡುವಿಕೆಗಳಂಥ ಕೃಷ್-e ಬೇಸಾಯಶಾಸ್ತ್ರದ ಕ್ರಮಗಳನ್ನು ಅವರು ಅಳವಡಿಸಿಕೊಂಡಿದ್ದಾರೆ. ಈ ಕ್ರಮಗಳನ್ನು ಬಳಸಿದುದರಿಂದಾಗಿ ಅವರ ಬೆಳೆಗಳ ಬೆಳವಣಿಗೆಯು ಉತ್ತಮವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹೆಚ್ಚಿನ ಇಳುವರಿಯನ್ನು ಅವರು ನಿರೀಕ್ಷಿಸುತ್ತಿದ್ದಾರೆ.
ಆರಂಭದಲ್ಲಿ, ಶ್ರೀ ಮನೋಜ್ಭಾಯಿ ಗಣೇಶ್ಭಾಯಿ ಭೇಸದಾದಿಯಾರವರು ಸಾಂಪ್ರದಾಯಿಕ ವಿಧಾನಗಳಿಂದ ಜಮೀನಿನ ಸಾಗುವಳಿಯನ್ನು ಮಾಡುತ್ತಿದ್ದರು, ಹರಿ ನೀರಾವರಿ ಪದ್ದತಿಯಿಂದ ಬೆಳೆಗೆ ನೀರು ನೀಡುತ್ತಿದ್ದರು, ರಸಗೊಬ್ಬರಗಳ ನೀಡಿಕೆ ಪ್ರಮಾಣದ ಮೇಲೆ ಹೆಚ್ಚು ನಿಯಂತ್ರಣವಿರುತ್ತಿರಲಿಲ್ಲ, ಹಾಗಾಗಿ ಅವರ ಸಾಗುವಳಿ ವೆಚ್ಚವು ಅಧಿಕವಾಗಿರುತ್ತಿತ್ತು. ಆದರೆ ಅಳವಡಿಸಿಕೊಳ್ಳುವ ಮನೋಭಾವ ಹಾಗೂ ಹೊಸ ಮತ್ತು ವಿನೂತನ ವಿಧಾನಗಳನ್ನು ಕಲಿಯುವ ಅವರ ಇಚ್ಛೆಯು ತಮಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಗತಿಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ. ಕೃಷ್-e ತಂಡದ ಸಹಾಯ ಮತ್ತು ಮಾರ್ಗದರ್ಶನದೊಂದಿಗೆ, ಅವರುಎಮ್ಐಎಸ್ ಅನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಕೃಷ್-e ಯ ಸಹಯೋಗದಲ್ಲಿ ಕೆವಿಕೆ ಬೆಳೆ ಆರೈಕೆ ತಂಡದಿಂದ ಒದಗಿಸಲಾಗುವ ಬೇಸಾಯಶಾಸ್ತ್ರ ಸೇವೆಗಳ ಆದಾರಿತವಾಗಿ ಹತ್ತಿ ಬೆಳೆಯನ್ನೂ ಸಹ ಬೆಳೆಯುತ್ತಾರೆ.
ಜಮೀನಿನ ಸಾಗುವಳಿಯನ್ನು ಮಾಡಲು ಸಾಂಪ್ರದಾಯಿಕ ವಿಧಾನಗಳು ಹಾಗೂ ನೀರಾವರಿ ಪದ್ಧತಿಗಳನ್ನು ಬಳಸುತ್ತಿದ್ದ ಶ್ರೀ ರಮೇಶ್ಭಾಯಿ ಗೋವರ್ಧನ್ಭಾಯಿ ಚೊವಟಿಯಾರವರಿಗೆ ರಸಗೊಬ್ಬರಗಳ ನೀಡಿಕೆ ಪ್ರಮಾಣದ ಮೇಲೆ ಹೆಚ್ಚು ನಿಯಂತ್ರಣವಿರುತ್ತಿರಲಿಲ್ಲ, ಹಾಗಾಗಿ ಅವರ ಸಾಗುವಳಿ ವೆಚ್ಚವು ಅಧಿಕವಾಗಿರುತ್ತಿತ್ತು. ಅಲ್ಲದೇ, ಮಳೆ ಮತ್ತು ನೀರಿನ ಮೂಲದ ಕೊರತೆಯಿಂದಾಗಿ ಹತ್ತಿ ಬೆಳೆಯ ಫಸಲು ಅವರ ನಿರೀಕ್ಷೆಗಿಂತ ಕಡಿಮೆಯಾಗಿತ್ತು. ಹತ್ತಿ ಬೆಳೆಯನ್ನು ಹೇಗೆ ಸಾಗುವಳಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಜ್ಞಾನವನ್ನು ನೀಡುವ ಮೂಲಕ, ರಸಾಯನಿಕ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಹಲವಾರು ಬಾರಿ ನೀಡುವ ಮೂಲಕ, ಮತ್ತು ಕೃಷ್-e ತಂಡವು ಕಾಲಕಾಲಕ್ಕೆ ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುವ ಮೂಲಕ, ತಮ್ಮ ಹತ್ತಿ ಸಾಗುವಳಿ ಮತ್ತು ತಮ್ಮ ಹಣಹೂಡಿಕೆಯ ಪ್ರತಿಫಲ ಬಗ್ಗೆ ಅವರು ಇಂದು ತುಂಬಾ ಸಂತುಷ್ಟರಾಗಿದ್ದಾರೆ.
ಪೆನುಗಂಟಿ ಪಾಪರಾವ್ಗ್ರಾಮ - ಯೆಂಡಗಂಟಿ
ಜಿಲ್ಲೆ - ವೆಸ್ಟ್ ಗೋದಾವರಿ
ಆಂಧ್ರ ಪ್ರದೇಶದ ಯೆಡಗಂಟಿ ಗ್ರಾಮದವರಾಗಿರುವ ಶ್ರೀ ಪೆನುಗಂಟಿ ಪಾಪರಾವ್ ಇವರು ಪ್ರಗತಿಯನ್ನು ಹೊಂದಬಯಸುವ ರೈತರಾಗಿದ್ದು, ಸುಧಾರಿತ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಕೃಷ್-e ತಂಡದ ನೆರವಿನೊಂದಿಗೆ, ಚಾಪೆ ಮಡಿ ಪದ್ಧತಿಯ ಜೊತೆಯಲ್ಲಿ ತಮ್ಮ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿ ವಿಧಾನಗಳನ್ನು ಯಶಸ್ವಿಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಫಲಿತಾಂಶ – ಉತ್ಪಾದಕತೆಯಲ್ಲಿ ಎಕರೆಗೆ 3525 ಕೆಜಿಯಿಂದ ಎಕರೆಗೆ 3750 ಕೆಜಿಗಳವರೆಗಿನ ಹೆಚ್ಚಳ.
ಕೃಷ್-e ಯನ್ನು ಪಾಲುದಾರರು ಮತ್ತು ಸೇವೆಗಳ ಪರಿಸರವ್ಯವಸ್ಥೆಯೊಂದಿಗೆ ಸ್ಥಾಪಿಸಿ, ಅನುಷ್ಠಾನಗೊಳಿಸಲಾಗುತ್ತದೆ.
ತಮ್ಮ ಹೊಲಗಳಿಂದ ಅತ್ಯುತ್ತಮ ಫಲವನ್ನು ಪಡೆದುಕೊಳ್ಳಲು ರೈತರಿಗೆ ನೆರವಾಗಲು, ಆಧುನಿಕ ಬೇಸಾಯ ವಿಧಾನಗಳನ್ನು ಜಾರಿಗೊಳಿಸುವಿಕೆಯು ಒಂದು ಪ್ರಮುಖವಾದ ಅಂಶವಾಗಿದೆ. ವಿತರಕರು, ಬಾಡಿಗೆ ಸೇವೆ ನೀಡುವ ನವ್ಯೋದ್ಯಮಿಗಳು ಮತ್ತು ರೈತ ರಾಯಭಾರಿಗಳ ಮೂಲಕ ಸ್ಥಳೀಯ ಬೆಂಬಲದಿಂದ, ವಿಶ್ವದಾದ್ಯಂತದ ಟೆಕ್ ಸ್ಟಾರ್ಟ್-ಅಪ್ಗಳು, ಬೆಳೆ ಪರಿಕರ ಸಂಸ್ಥೆಗಳು ಮತ್ತು ಇತರ ಹಲವಾರು ಪಾಲುದಾರರನ್ನೂ ಸಹ ಕೃಷ್-e ಪರಿಸರವ್ಯವಸ್ಥೆಯು ಒಳಗೊಳ್ಳುತ್ತದೆ.
ಸಲಹಾ ಸೇವೆಗಳು
ಕೆಲಸಗಳನ್ನು ಹೆಚ್ಚು ಉತ್ತಮವಾಗಿ ಮಾಡಿ, ಹೆಚ್ಚು ಬಲವಾದ ಫಲಿತಾಂಶಗಳನ್ನು ಪೂರೈಸುವುದಕ್ಕಾಗಿ ನಿಮ್ಮ ಅನುಭವವನ್ನು ನಮ್ಮ ಪರಿಣತಿಯೊಂದಿಗೆ ಕೃಷ್-e ಸಂಯೋಜಿಸುತ್ತದೆ.
ರೈತರು ಪ್ರತಿ ಎಕರೆಯ ಇಳುವರಿ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಲು, ಹಾಗೂ ಸಾಗುವಳಿ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಕೃಷ್-e ಸಲಹಾ ಸೇವೆಯು ನೆರವಾಗುತ್ತದೆ. ನಮ್ಮ ಸಲಹಾ ತಂಡದಲ್ಲಿರುವ ತಜ್ಞರು, ಬೆಳೆ ಚಕ್ರದ ಪ್ರತಿ ಹಂತದಾದ್ಯಂತ ಉತ್ಪಾದಕ ಅವಕಾಶಗಳನ್ನು ಕಂಡುಕೊಳ್ಳಲು ರೈತರಿಗೆ ನೆರವಾಗುತ್ತಾರೆ. ತಮ್ಮ ಹೊಲದಲ್ಲಿ ಉಪಕರಣಗಳು, ತಾಂತ್ರಿಕತೆ ಮತ್ತು ಆಧುನಿಕ ಪ್ರಕ್ರಿಯೆಗಳನ್ನು ಬಳಸಲು ರೈತರಿಗೆ ಅವರು ಮಾರ್ಗದರ್ಶನ ಮಾಡುತ್ತಾರೆ ಹಾಗೂ ನೆರವಾಗುತ್ತಾರೆ.
ನಿಮ್ಮ ಹೊಲದ ಉತ್ಪಾದಕತೆಯನ್ನು ಸುಧಾರಿಸಲು ಸುಧಾರಿತ ಯಂತ್ರಗಳನ್ನು ಕೃಷ್-e ನಿಮಗೆ ಬಾಡಿಗೆಗೆ ನೀಡುತ್ತದೆ.
ತಂತ್ರಜ್ಞಾನ ಹಾಗೂ ಡಿಜಿಟಲ್ ಕ್ಷೇತ್ರದಲ್ಲಿನ ಪ್ರಗತಿಯಿಂದಾಗಿ, ಕಳೆದ ಕೆಲವು ವರ್ಷಗಳಲ್ಲಿ ಟ್ರ್ಯಾಕ್ಟರ್ಗಳು ಮತ್ತು ಕೃಷಿ ಉಪಕರಣಗಳು ಆಧುನಿಕೀಕರಣಗೊಂಡಿವೆ. ಈಗ, ನಿಮ್ಮ ಟ್ರ್ಯಾಕ್ಟರ್ ಹಳೆಯದಾಗಿದ್ದಲ್ಲಿ, ಅಥವಾ ಉಪಕರಣಗಳ ಶ್ರೇಣಿಯೊಂದು ನಿಮ್ಮ ಬಳಿ ಇಲ್ಲದಿದ್ದಲ್ಲಿ, ಹೆಚ್ಚು ಸುಧಾರಿತ ಉಪಕರಣಗಳನ್ನು ನಮ್ಮಿಂದ ಸುಲಭವಾಗಿ ನೀವು ಬಾಡಿಗೆಗೆ ಪಡೆದುಕೊಳ್ಳಬಹುದು. ನಿಮ್ಮ ಜಮೀನಿನ ಭೂಮಿ ಸಿದ್ಧತೆಯನ್ನು ಮಾಡಲು, ನಿಮ್ಮ ಬೆಳೆಯನ್ನು ರಕ್ಷಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಕಾರ್ಯಕ್ಷಮತೆಯಿಂದ ಕೊಯ್ಲು ಮಾಡಲು ನಮ್ಮ ಬಾಡಿಗೆ ಉಪಕರಣಗಳು ನಿಮಗೆ ನೆರವಾಗುತ್ತವೆ.
ನಮ್ಮ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನಮ್ಮ ಬಾಡಿಗೆ ಸೇವೆಗಳಿಗೆ ಪ್ರವೇಶಾವಕಾಶವನ್ನು ಪಡೆದುಕೊಳ್ಳಿ ಹಾಗೂ ನಮ್ಮ ಪ್ಯಾಕೇಜ್ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.
ನಿಮ್ಮ ಬಳಿ ಕೆಲವೇ ಎಕರೆಗಳಷ್ಟು ಜಮೀನು ಇರಲಿ ಅಥವಾ ಕೆಲವು ನೂರು ಎಕರೆಗಳಷ್ಟು ಜಮೀನು ಇರಲಿ, ಅತ್ಯಂತ ಸುಧಾರಿತ ಡಿಜಿಟಲ್ / ಸ್ಮಾರ್ಟ್ ಫಾರ್ಮಿಂಗ್ ಸೊಲ್ಯುಷನ್ಗಳನ್ನೂ ಸಹ ಈಗ ನೀವು ಬಳಸಬಹುದು.
ನಿಮ್ಮ ಕೃಷಿಯನ್ನು ನಿಜವಾಗಿಯೂ ರೂಪಾಂತರಗೊಳಿಸಲು ಡಿಜಿಟಲ್ ತಂತ್ರಜ್ಞಾನದಲ್ಲಿ ಸುಧಾರಣೆಗಳನ್ನು ಕೃಷ್-e ಮಾಡುತ್ತದೆ.
ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದಲ್ಲಿ, ಸ್ಮಾರ್ಟ್ ಸೊಲ್ಯೂಷನ್ಗಳು ಅನಂತವಾಗಿ ಶ್ರೇಷ್ಠವಾದ, ಹೆಚ್ಚು ವೇಗದಿಂದ ಕೂಡಿದ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಕಡಿಮೆ ವೆಚ್ಚಗಳೊಂದಿಗೆ ಹೆಚ್ಚು ಉತ್ತಮವಾದ ಬೆಳೆಯನ್ನು ನೀಡಲು ಸಜ್ಜಾಗಿವೆ. ಕೃಷ್-e ಸ್ಮಾರ್ಟ್ ಸೊಲ್ಯೂಷನ್ಗಳು ಸಂಪೂರ್ಣ ವ್ಯವಸ್ಥೆಗಳ ರೂಪದಲ್ಲಿ ಹಾಗೂ ಬಾಡಿಗೆ / ಚಂದಾದಾರಿಕೆ ಯೋಜನೆಗಳ ಮೇಲೆ ಖರೀದಿಗಾಗಿ ಲಭ್ಯವಿರುವುದರಿಂದ, ಯಾವುದೇ ವಿಸ್ತೀರ್ಣದ ಹೊಲಗಳ ಮೇಲೆ ಅವುಗಳನ್ನು ಬಳಸಬಹುದು. ಇದು, ವಾಸ್ತವಿಕ ಕೃಷಿ ಸವಾಲುಗಳ ಮೇಲೆ ಕೆಲಸ ಮಾಡುವ, ವಾಸ್ತವಿಕ ಪರಿಣಾಮವನ್ನು ನೀಡುವ ಒಂದು ನೈಜವಾದ ತಂತ್ರಜ್ಞಾನವಾಗಿದೆ.
ರೈತರು ಭಾರತದ ಬೆನ್ನೆಲುಬಾಗಿದ್ದಾರೆ ಮತ್ತು ನಾವು ರೈತರ ಬಲವಾಗಿದ್ದೇವೆ. ಒಟ್ಟಾಗಿ ನಾವು ಕೃಷಿಯನ್ನು ಮುನ್ನಡೆಸುತ್ತೇವೆ. ಕೃಷ್-e ಎಂಬುದು ಕೃಷಿಯನ್ನು ಮುನ್ನಡೆಸುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು, ರೈತರ ಪ್ರತಿಯೊಂದು ಅಗತ್ಯತೆಯನ್ನು ಪೂರೈಸುವುದಕ್ಕಾಗಿ ಪರಿಣತಿ ಮತ್ತು ಶ್ರೇಷ್ಠತೆಗಳು ಒಗ್ಗೂಡಿರುವಂಥ ಪಾಲುದಾರಿಕೆಗಳ ಒಂದು ಜೀವಂತ ಸಂಸ್ಥೆಯಾಗಿದೆ.