ರೈತರು ಪ್ರತಿ ಎಕರೆಯ ಇಳುವರಿ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಲು, ಹಾಗೂ ಸಾಗುವಳಿ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಕೃಷ್-e ಸಲಹಾ ಸೇವೆಯು ನೆರವಾಗುತ್ತದೆ.

ನಮ್ಮ ಸಲಹಾ ತಂಡದಲ್ಲಿರುವ ತಜ್ಞರು, ಬೆಳೆ ಚಕ್ರದ ಪ್ರತಿ ಹಂತದಾದ್ಯಂತ ಉತ್ಪಾದಕ ಅವಕಾಶಗಳನ್ನು ಕಂಡುಕೊಳ್ಳಲು ರೈತರಿಗೆ ನೆರವಾಗುತ್ತಾರೆ. ತಮ್ಮ ಹೊಲದಲ್ಲಿ ಉಪಕರಣಗಳು, ತಾಂತ್ರಿಕತೆ ಮತ್ತು ಆಧುನಿಕ ಪ್ರಕ್ರಿಯೆಗಳನ್ನು ಬಳಸಲು ರೈತರಿಗೆ ಅವರು ಮಾರ್ಗದರ್ಶನ ಮಾಡುತ್ತಾರೆ ಹಾಗೂ ನೆರವಾಗುತ್ತಾರೆ.

950 ಕೃಷ್-e ತಾಂತ್ರಿಕತೆ ಪ್ಲಾಟುಗಳು, ನಮ್ಮ ಪರಿಣತಿ ಮತ್ತು ವಿಚಾರಗಳ ಸಕಾರಾತ್ಮಕ ಪ್ರಭಾವವನ್ನು ಪ್ರದರ್ಶಿಸಿವೆ:

ನಮ್ಮ ಸಲಹಾ ಸೇವೆಯು ಹಲವಾರು ಬೆಳೆಗಳ ಮೇಲೆ, 2 ವರ್ಷಗಳಿಗೂ ಹೆಚ್ಚು ಕಾಲ, ಭಾರತದಾದ್ಯಂತ 950 ರೈತರೊಂದಿಗೆ ಕೆಲಸ ಮಾಡಿದೆ. ಕೃಷ್-e ಪರಿಣತಿ ಮತ್ತು ವಿಚಾರಗಳೊಂದಿಗೆ ಬೇಸಾಯವನ್ನು ಹೇಗೆ ಕೈಗೊಳ್ಳಬೇಕು ಎಂಬುದನ್ನು ರೈತರಿಗೆ ತೋರಿಸುವ ‘ತಾಂತ್ರಿಕತೆ ಪ್ಲಾಟುಗಳ’ ನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷ್-e ಕೃಷಿಯಿಂದ ಪೂರೈಸಲಾಗುವ, ಪ್ರತಿ ಎಕರೆಯ ಆದಾಯದಲ್ಲಿ ಕಂಡುಬರುವ ಸುಧಾರಣೆಯನ್ನು ತಮ್ಮ ಸ್ವಂತ ಹೊಲಗಳಲ್ಲಿ ರೈತರು ನೋಡಿದ್ದಾರೆ.

ಬೇಸಾಯಶಾಸ್ತ್ರಜ್ಞರು ಮತ್ತು ರಾಯಭಾರಿಗಳನ್ನು ಒಳಗೊಂಡಿರುವ ಕೃಷ್-e ಸಲಹಾ ತಂಡವು ರೈತರಿಗೆ ಪರಿಣತಿ ಮತ್ತು ಅನುಭವಕ್ಕೆ ಸುಲಭ ಪ್ರವೇಶಾವಕಾಶವನ್ನು ನೀಡುತ್ತದೆ:

"ಬೇಸಾಯಶಾಸ್ತ್ರಜ್ಞರು ವೈಜ್ಞಾನಿಕ ಜ್ಞಾನವನ್ನು ಒದಗಿಸುತ್ತಾರೆ, ಹಾಗೂ ರಾಯಭಾರಿಗಳು ಹೊಲದ ಅನುಭವವನ್ನು ಒದಗಿಸುತ್ತಾರೆ. ಮತ್ತು ನಿಮ್ಮ ಅನುಭವದ ಜೊತೆಗೂಡಿ, ನಿಮ್ಮ ಹೊಲದಲ್ಲಿ ಹೆಚ್ಚು ಬಲವಾದ ಫಲಿತಾಂಶಗಳನ್ನು ನೀವು ಸಾಧಿಸಲು ಅವರು ನಿಮಗೆ ನೆರವಾಗುತ್ತಾರೆ.

ಪರಿಣತಿ ಮತ್ತು ಪರಿಹಾರೋಪಾಯಗಳಿಗೆ ಸುಲಭ ಪ್ರವೇಶಾವಕಾಶವನ್ನು ರೈತರಿಗೆ ನೀಡುವ ವಿಶೇಷ ಆ್ಯಪ್‌ಗಳ ಮೂಲಕ 24 x 7 ಮಾರ್ಗದರ್ಶನವನ್ನೂ ಸಹ ಒದಗಿಸಲಾಗುತ್ತದೆ."

ನಿಮ್ಮ ಹೊಲಗಳಲ್ಲಿ ಇ-ಕ್ರಾಂತಿಯನ್ನು ಆನಂದಿಸಲು ಕೃಷ್-e ಬೇಸಾಯ ವಿಧಾನವನ್ನು ಪಡೆದುಕೊಳ್ಳಿ!
ನಮ್ಮ ಸಹಾಯಕರೊಂದಿಗೆ ಮಾತನಾಡಿ, ಬುಕಿಂಗ್‌ ಒಂದನ್ನು ಮಾಡಲು 1800-266-1555 ಈ ಸಂಖ್ಯೆಗೆ ಕರೆ ಮಾಡಿ.

ಕೃಷ್-e ಯೊಂದಿಗೆ ಅಭಿವೃದ್ಧಿಯನ್ನು ಸಾಧಿಸಿ

ಲಕ್ಷಾಂತರ ಸಂಖ್ಯೆಯ ವಿಜೇತ ರೈತರನ್ನು ಸೃಷ್ಟಿಸುವ ಯುಗವನ್ನು ಕೃಷ್-e ಆರಂಭಿಸುತ್ತದೆ

ಭಾರತೀಯ ಕೃಷಿಯನ್ನು ರೂಪಾಂತರಗೊಳಿಸಲು, ತಮ್ಮ ಹೊಲಗಳಿಂದ ಅತ್ಯುತ್ತಮ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಪಡೆದುಕೊಳ್ಳುವಂತೆ ಲಕ್ಷಾಂತರ ರೈತರನ್ನು ಸುಧಾರಿಸುವ ಗುರಿಯನ್ನು ಕೃಷ್-e ಹೊಂದಿದೆ.

ಕೈಲಾಸ್‌ ಮೋರೆ ಗ್ರಾಮ - ಪೂರಿ

ಜಿಲ್ಲೆ - ಔರಂಗಾಬಾದ್

ಓರ್ವ ಕೃಷ್-e ತಾಂತ್ರಿಕತೆ ಪ್ಲಾಟ್‌ ರೈತರಾಗಿರುವ ಶ್ರೀಯುತ ಕೈಲಾಶ್‌ ಮೋರೆ ಇವರು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್‌ ಜಿಲ್ಲೆಯವರಾಗಿದ್ದಾರೆ. 8 ತಿಂಗಳುಗಳ ಹಿಂದೆ, ತಮ್ಮ ಬೆಳೆಗಾಗಿ ಕೃಷ್-e‌ ಕಬ್ಬು ಬೆಳೆಯ ಡಿಜಿಟಲ್‌ ಕ್ಯಾಲೆಂಡರ್‌ ಅನ್ನು ಅವರು ಅಳವಡಿಸಿಕೊಂಡರು. ಕೃಷ್-e ಸಲಹೆ ಮತ್ತು ಆ್ಯಪ್‌ ಸಪೋರ್ಟ್‌ನ ನೆರವಿನೊಂದಿಗೆ, ಪ್ರಸ್ತುತದಲ್ಲಿ, ಅವರ ಕಬ್ಬಿನ ಬೆಳೆಯು 7.5 ಅಂಗುಲಗಳಷ್ಟು ಗಿಣ್ಣುಗಳ ಗಾತ್ರವನ್ನು ಮತ್ತು 3.5 ಅಂಗುಲಗಳಷ್ಟು ದಪ್ಪವನ್ನು ಹೊಂದಿದೆ. ಇದರ ಶ್ರೇಯವು ಉತ್ತಮ ಬೆಳೆ ನಿರ್ವಹಣಾ ಕ್ರಮಗಳಾದಂತಹ ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ ಮುಂತಾದವುಗಳಿಗೆ ಸಲ್ಲುತ್ತದೆ, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಸಾಗುವಳಿ ವೆಚ್ಚದಲ್ಲಿ 12% ಉಳಿತಾಯವನ್ನು ಮಾಡಲು ಅವರಿಗೆ ಇದು ನೆರವಾಗಿದೆ.

ಅಂಕುಶ್‌ ದೊಡ್‌ಮೀಸೆ ಗ್ರಾಮ – ಸಾದೊಬಾಚಿವಾಡಿ ಬಾರಾಮತಿ

ಜಿಲ್ಲೆ - ಪುಣೆ

ಪುಣೆಯ ಸಾದೊಬಾಚಿವಾಡಿ ಬಾರಾಮತಿ ಗ್ರಾಮದವರಾದ ಶ್ರೀ ಅಂಕುಶ್‌ ದೊಡ್‌ಮೀಸೆ ಇವರು ಓರ್ವ ಪ್ರಗತಿಪರ ರೈತರಾಗಿದ್ದು, ತಮ್ಮ ಬೆಳೆಗಳ ಆರೈಕೆಯನ್ನು ಮಾಡಲು ಕೃಷ್-e ಕಬ್ಬಿನ ಬೆಳೆಯ ಡಿಜಿಟಲ್‌ ಸಲಹೆಯನ್ನು ಬಳಸುತ್ತಾರೆ. ಇವರು ನಮ್ಮ ನಿಯತಕಾಲಿಕ ಚಟುವಟಿಕೆ ಗಳಾದಂತಹ  ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ, ಹ್ಯೂಮಿಕ್‌ + ಫಾಸ್ಫರಿಕ್‌ ಆಮ್ಲದಿಂದ ಬೇರು ತೊಯ್ಯಿಸುವಿಕೆಗಳಂಥ (ಡ್ರೇನ್ಚಿಂಗ್) ಅನುಸರಿಸುತ್ತಿದ್ದು. ಈ ಎಲ್ಲ ತಾಂತ್ರಿಕತೆಗಳ ನೆರವಿನೊಂದಿಗೆ, ಪ್ರಸ್ತುತದಲ್ಲಿ ಸುಮಾರು 7-8 ರಷ್ಟು ಉತ್ತಮ ಸಂಖ್ಯೆಯ ಮೊಳಕೆಗಳನ್ನು ಅವರು ಪಡೆದುಕೊಂಡಿದ್ದಾರೆ ಅಂದರೆ ಸುಮಾರು 80% ವರೆಗೆ    ಮೊಳಕೆಯೊಡೆಯುವಿಕೆಯನ್ನು ಇದು ಅವರಿಗೆ ನೀಡುತ್ತಿದೆ.

ದಾರಾ ಪ್ರತಾಪ್‌ ಸಿಂಗ್‌ ರಘುಬಂಶಿ ಗ್ರಾಮ - ಗ್ರೆತಿಯಾ

ಜಿಲ್ಲೆ - ಛಿಂದ್ವಾರಾ

ಮಧ್ಯ ಪ್ರದೇಶ ರಾಜ್ಯದ ಛಿಂದ್ವಾರಾ ಜಿಲ್ಲೆಯ ಗ್ರೆತಿಯಾ ತಾಲೂಕು, ಚೌರಾಯಿ ಗ್ರಾಮದವರಾದ ಶ್ರೀ ದಾರಾ ಪ್ರತಾಪ್‌ ಸಿಂಗ್‌ ರಘುಬಂಶಿ ಇವರು ಓರ್ವ ಪ್ರಗತಿಪರ  ರೈತರಾಗಿದ್ದು, ಕೃಷ್‌-e ತಂಡದ ನೆರವಿನೊಂದಿಗೆ ಯಾಂತ್ರೀಕರಣ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ನ್ಯುಮ್ಯಾಟಿಕ್‌ ಪ್ಲ್ಯಾಂಟರ್‌ಗಳನ್ನು ಬಳಸಿರುವುದರಿಂದ ಸರಿಯಾದ ಬಿತ್ತನೆಯ ಆಳ, ಬೀಜದಿಂದ ಬೀಜದ  ನಡುವಿನ ಹಾಗೂ ಸಾಲಿನಿಂದ ಸಾಲಿನ ನಡುವಿನನಿಖರ ಅಂತರವು. ಇದರ ಪರಿಣಾಮವಾಗಿ ಮೊಳಕೆಯೊಡೆಯುವಿಕೆಯ ಸಮಾನವಾಗಿದೆ ಹಾಗೂ ಹೈಬ್ರಿಡ್‌ ಗೋವಿನಜೋಳದ ಬೀಜೋತ್ಪಾದನೆಯ ವೆಚ್ಚಗಳು ಕಡಿಮೆಯಾಗಿವೆ.

ಹೇಮಂತ್‌ ವರ್ಮಾ ಗ್ರಾಮ - ಹತೋಡಾ

ಜಿಲ್ಲೆ - ಛಿಂದ್ವಾರಾ

ಇವರು ಹೇಮಂತ್‌ ವರ್ಮಾ. ಇವರು ಮಧ್ಯ ಪ್ರದೇಶದ ಹತೋಡಾ ಗ್ರಾಮದ ಓರ್ವ ಉತ್ತಮ ಪ್ರಗತಿಪರ  ರೈತರಾಗಿದ್ದಾರೆ. ಕೃಷ್-e ತಂಡದ ನೆರವು ಮತ್ತು ಮಾರ್ಗದರ್ಶನದೊಂದಿಗೆ, ಭೂಮಿ ಸಿದ್ಧತೆ ಹಾಗೂ ಕೊಯ್ಲು ಮಾಡುವಿಕೆಗಳಂಥ ಕೃಷ್-e ಬೇಸಾಯಶಾಸ್ತ್ರದ ಕ್ರಮಗಳನ್ನು ಅವರು ಅಳವಡಿಸಿಕೊಂಡಿದ್ದಾರೆ. ಈ ಕ್ರಮಗಳನ್ನು ಬಳಸಿದುದರಿಂದಾಗಿ ಅವರ ಬೆಳೆಗಳ ಬೆಳವಣಿಗೆಯು ಉತ್ತಮವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹೆಚ್ಚಿನ ಇಳುವರಿಯನ್ನು ಅವರು ನಿರೀಕ್ಷಿಸುತ್ತಿದ್ದಾರೆ.

ಮನೋಜ್‌ಭಾಯಿ ಗಣೇಶ್‌ಭಾಯಿ ಭೇಸದಾದಿಯಾ ಗ್ರಾಮ - ಮೋತಿ ಬಾನುಗಡ್

ಜಿಲ್ಲೆ - ಜಾಮ್‌ನಗರ್

ಆರಂಭದಲ್ಲಿ, ಶ್ರೀ ಮನೋಜ್‌ಭಾಯಿ ಗಣೇಶ್‌ಭಾಯಿ ಭೇಸದಾದಿಯಾರವರು ಸಾಂಪ್ರದಾಯಿಕ ವಿಧಾನಗಳಿಂದ ಜಮೀನಿನ ಸಾಗುವಳಿಯನ್ನು ಮಾಡುತ್ತಿದ್ದರು, ಹರಿ ನೀರಾವರಿ ಪದ್ದತಿಯಿಂದ ಬೆಳೆಗೆ ನೀರು ನೀಡುತ್ತಿದ್ದರು, ರಸಗೊಬ್ಬರಗಳ ನೀಡಿಕೆ ಪ್ರಮಾಣದ ಮೇಲೆ ಹೆಚ್ಚು ನಿಯಂತ್ರಣವಿರುತ್ತಿರಲಿಲ್ಲ, ಹಾಗಾಗಿ ಅವರ ಸಾಗುವಳಿ ವೆಚ್ಚವು ಅಧಿಕವಾಗಿರುತ್ತಿತ್ತು. ಆದರೆ ಅಳವಡಿಸಿಕೊಳ್ಳುವ ಮನೋಭಾವ ಹಾಗೂ ಹೊಸ ಮತ್ತು ವಿನೂತನ  ವಿಧಾನಗಳನ್ನು ಕಲಿಯುವ ಅವರ ಇಚ್ಛೆಯು ತಮಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಗತಿಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ. ಕೃಷ್-e ತಂಡದ ಸಹಾಯ ಮತ್ತು ಮಾರ್ಗದರ್ಶನದೊಂದಿಗೆ, ಅವರುಎಮ್‌ಐಎಸ್ ಅನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಕೃಷ್-e ಯ ಸಹಯೋಗದಲ್ಲಿ ಕೆವಿಕೆ ಬೆಳೆ ಆರೈಕೆ ತಂಡದಿಂದ ಒದಗಿಸಲಾಗುವ ಬೇಸಾಯಶಾಸ್ತ್ರ ಸೇವೆಗಳ ಆದಾರಿತವಾಗಿ ಹತ್ತಿ ಬೆಳೆಯನ್ನೂ ಸಹ ಬೆಳೆಯುತ್ತಾರೆ.

ರಮೇಶ್‌ಭಾಯಿ ಗೋವರ್ಧನ್‌ಭಾಯಿ ಚೊವಟಿಯಾ ಗ್ರಾಮ - ಮೋಟಾ ತಾವರಿಯಾ

ಜಿಲ್ಲೆ - ಜಾಮ್‌ನಗರ್

ಜಮೀನಿನ ಸಾಗುವಳಿಯನ್ನು ಮಾಡಲು ಸಾಂಪ್ರದಾಯಿಕ ವಿಧಾನಗಳು ಹಾಗೂ ನೀರಾವರಿ ಪದ್ಧತಿಗಳನ್ನು ಬಳಸುತ್ತಿದ್ದ ಶ್ರೀ ರಮೇಶ್‌ಭಾಯಿ ಗೋವರ್ಧನ್‌ಭಾಯಿ ಚೊವಟಿಯಾರವರಿಗೆ ರಸಗೊಬ್ಬರಗಳ ನೀಡಿಕೆ ಪ್ರಮಾಣದ ಮೇಲೆ ಹೆಚ್ಚು ನಿಯಂತ್ರಣವಿರುತ್ತಿರಲಿಲ್ಲ, ಹಾಗಾಗಿ ಅವರ ಸಾಗುವಳಿ ವೆಚ್ಚವು ಅಧಿಕವಾಗಿರುತ್ತಿತ್ತು. ಅಲ್ಲದೇ, ಮಳೆ ಮತ್ತು ನೀರಿನ ಮೂಲದ ಕೊರತೆಯಿಂದಾಗಿ ಹತ್ತಿ ಬೆಳೆಯ ಫಸಲು ಅವರ ನಿರೀಕ್ಷೆಗಿಂತ ಕಡಿಮೆಯಾಗಿತ್ತು. ಹತ್ತಿ ಬೆಳೆಯನ್ನು ಹೇಗೆ ಸಾಗುವಳಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಜ್ಞಾನವನ್ನು ನೀಡುವ ಮೂಲಕ, ರಸಾಯನಿಕ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಹಲವಾರು ಬಾರಿ ನೀಡುವ ಮೂಲಕ, ಮತ್ತು ಕೃಷ್‌-e ತಂಡವು ಕಾಲಕಾಲಕ್ಕೆ ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುವ ಮೂಲಕ, ತಮ್ಮ ಹತ್ತಿ ಸಾಗುವಳಿ ಮತ್ತು ತಮ್ಮ ಹಣಹೂಡಿಕೆಯ ಪ್ರತಿಫಲ  ಬಗ್ಗೆ ಅವರು ಇಂದು ತುಂಬಾ ಸಂತುಷ್ಟರಾಗಿದ್ದಾರೆ.

ಪೆನುಗಂಟಿ ಪಾಪರಾವ್ ಗ್ರಾಮ - ಯೆಂಡಗಂಟಿ

ಜಿಲ್ಲೆ - ವೆಸ್ಟ್‌ ಗೋದಾವರಿ

ಆಂಧ್ರ ಪ್ರದೇಶದ ಯೆಡಗಂಟಿ ಗ್ರಾಮದವರಾಗಿರುವ ಶ್ರೀ ಪೆನುಗಂಟಿ ಪಾಪರಾವ್ ಇವರು ಪ್ರಗತಿಯನ್ನು ಹೊಂದಬಯಸುವ ರೈತರಾಗಿದ್ದು, ಸುಧಾರಿತ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಕೃಷ್-e ತಂಡದ ನೆರವಿನೊಂದಿಗೆ, ಚಾಪೆ ಮಡಿ ಪದ್ಧತಿಯ ಜೊತೆಯಲ್ಲಿ ತಮ್ಮ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿ ವಿಧಾನಗಳನ್ನು ಯಶಸ್ವಿಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಫಲಿತಾಂಶ – ಉತ್ಪಾದಕತೆಯಲ್ಲಿ ಎಕರೆಗೆ 3525 ಕೆಜಿಯಿಂದ ಎಕರೆಗೆ 3750 ಕೆಜಿಗಳವರೆಗಿನ ಹೆಚ್ಚಳ.