ಸ್ಮಾರ್ಟ್‌ ಸೊಲ್ಯೂಷನ್‌ಗಳು, ಸಾಂಪ್ರದಾಯಿಕ ವಿಧಾನಗಳಿಗಿಂತ ಅನಂತವಾಗಿ ಶ್ರೇಷ್ಠವಾದ ಮತ್ತು ಹೆಚ್ಚು ವೇಗದಿಂದ ಕೂಡಿದ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಕಡಿಮೆ ವೆಚ್ಚಗಳೊಂದಿಗೆ ಹೆಚ್ಚು ಉತ್ತಮವಾದ ಬೆಳೆ ಇಳುವರಿ ನೀಡುತ್ತವೆ. ಕೃಷ್-e ಸ್ಮಾರ್ಟ್‌ ಸೊಲ್ಯೂಷನ್‌ಗಳನ್ನು  ಯಾವುದೇ ವಿಸ್ತೀರ್ಣದ ಜಮೀನುಗಳ ಮೇಲೆ ಅವುಗಳನ್ನು ಬಳಸಬಹುದಾಗಿದೆ ಸಂಪೂರ್ಣ ವ್ಯವಸ್ಥೆಗಳು ಖರೀದಿಗಾಗಿ ಲಭ್ಯವಿರುವುದ ಜೊತೆಗೆ ಬಾಡಿಗೆ / ಚಂದಾದಾರಿಕೆ ಯೋಜನೆಗಳ ಮೇಲೆ ಲಭ್ಯವಾಗಲಿವೆ. 

ಇದು ನೈಜ ತಂತ್ರಜ್ಞಾನವಾಗಿದ್ದು ನಿಜವಾದ ಕೃಷಿ ಸವಾಲುಗಳನ್ನು ಎದುರಿಸಲು, ನಿಜವಾದ ಪರಿಣಾಮವನ್ನು ನೀಡುತ್ತದೆ.

ಪೀಡೆನಾಶಕ ಬಳಕೆಯನ್ನು ಕಡಿಮೆ ಮಾಡಲು ದ್ರಾಕ್ಷಿ ಪೀಡೆ ನಿಯಂತ್ರಣ

ಭಾರತದಲ್ಲಿ ದ್ರಾಕ್ಷಿ ಕೃಷಿಯು ರೋಗಗಳು/ಪೀಡೆಗಳು, ಪೀಡೆನಾಶಕಗಳ ಅತಿಯಾದ ಬಳಕೆ ಮತ್ತು ದ್ರಾಕ್ಷಿ ಬಳ್ಳಿಗಳಲ್ಲಿ ಸೋಂಕುಗಳನ್ನು ಗುರುತಿಸಲು ಕೊಯ್ಲಿನ ಕಾಲದಲ್ಲಿ ಕೌಶಲ್ಯಯುಕ್ತ ಬೇಸಾಯಶಾಸ್ತ್ರಜ್ಞರ ಕೊರತೆಗಳಂಥ ಸವಾಲುಗಳನ್ನು ಎದುರಿಸುತ್ತದೆ.

ರೋಗಗಳನ್ನು ಗುರುತಿಸುವುದು ಮತ್ತು ಸ್ಥಳನಿರ್ಧರಣೆ (ಜಿಯೊಲೊಕೇಶನ್) ಮಾಡುವುದು, ಆಮೂಲಕ ಪೀಡೆಗಳ ಮುತ್ತಿಗೆಯನ್ನು ಆರಂಭದಲ್ಲಿಯೇ ಮತ್ತು ನಿಖರವಾಗಿ ನಿಯಂತ್ರಿಸುವುದು.

ರಸಗೊಬ್ಬರ ಬಳಕೆಯನ್ನು ಸಮರ್ಪಕಗೊಳಿಸಲು ಮಣ್ಣು ನಕ್ಷೆ ತಯಾರಿಕೆ

ನಿಮ್ಮ ಹೊಲದ ಪ್ರತಿ ಭಾಗವೂ ಒಂದೇ ಸಮನಾದ ಮಣ್ಣಿನ ಗುಣಮಟ್ಟವನ್ನಾಗಲಿ ಅಥವಾ ರಸಗೊಬ್ಬರಗಳನ್ನು ಇಂಗಿಸುವ ಸಮಾನ ಸಾಮರ್ಥ್ಯವನ್ನಾಗಲಿ ಹೊಂದಿರುವುದಿಲ್ಲ. ನಮ್ಮ ವಿಜ್ಞಾನವು ನಿಮ್ಮ ಹೊಲದ ಬೇರೆಬೇರೆ ಭಾಗಗಳಿಗೆ ಸೂಕ್ತವಾಗುವ ರಸಗೊಬ್ಬರ ನೀಡಿಕೆಯ ಮಟ್ಟದ ನಕ್ಷೆಯನ್ನು ತಯಾರಿಸಿ ನಿಮಗೆ ತೋರಿಸುತ್ತದೆ.

"ನಿಖರವಾದ ಗುರಿ  ತಲುಪಿಸುವುದಕ್ಕಾಗಿ ಡ್ರೋನ್‌ ಮೂಲಕ ಪೀಡೆನಾಶಕ ಸಿಂಪರಣೆ"

ಡ್ರೋನ್‌ ತಂತ್ರಜ್ಞಾನದೊಂದಿಗೆ ನಿಖರ ಕೃಷಿಯ ಮುಂದಿನ ಹಂತವು, ಪೀಡೆನಾಶಕ ಮತ್ತು ದ್ರವ ರಸಗೊಬ್ಬರ ನೀಡಿಕೆಯಲ್ಲಿ ನೆರವಾಗುವುದಾಗಿದೆ.

ಕಬ್ಬಿನ ಬೆಳೆಯ ಸೂಕ್ತ ಕೊಯ್ಲು ಮಾಡುವಿಕೆ

ನಿಮ್ಮ ಕಬ್ಬಿನ ಬೆಳೆಯು ಉತ್ತುಂಗದಲ್ಲಿದೆ, ಕೊಯ್ಲಿಗೆ ಸಿದ್ಧವಾಗಿದೆಯೇ? ನಿಮ್ಮ ಕಬ್ಬಿನ ಬೆಳೆಯಿಂದ ಗರಿಷ್ಟ ಫಸಲನ್ನು ನೀವು ಪಡೆದುಕೊಳ್ಳಲು ಅನುವಾಗುವಂತೆ ಅದು ಯಾವಾಗ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ಕೊಯ್ಲಿಗೆ ಸಿದ್ಧವಾಗಿದೆ ಎಂಬುದನ್ನು ನಮ್ಮ ತಾಂತ್ರಿಕತೆಗಳು ನಿಮಗೆ ತಿಳಿಸುತ್ತವೆ. ನಿಮ್ಮ ಕೊಯ್ಲಿನ ಏರ್ಪಾಡುಗಳನ್ನು ಮುಂಚಿತವಾಗಿ ಮಾಡಿಕೊಳ್ಳುವಲ್ಲಿಯೂ ಸಹ ಅದು ನಿಮಗೆ ನೆರವಾಗುತ್ತದೆ.

ನಿಮ್ಮ ಜಮೀನುಗಳಲ್ಲಿ ಇ-ಕ್ರಾಂತಿಯನ್ನು ಆನಂದಿಸಲು ಕೃಷ್-e ಬೇಸಾಯ ವಿಧಾನವನ್ನು ಪಡೆದುಕೊಳ್ಳಿ!
ನಮ್ಮ ಸಹಾಯಕರೊಂದಿಗೆ ಮಾತನಾಡಿ, ಬುಕಿಂಗ್‌ ಮಾಡಲು 1800-266-1555 ಈ ಸಂಖ್ಯೆಗೆ ಕರೆ ಮಾಡಿ.

ಕೃಷ್-e ಯೊಂದಿಗೆ ಅಭಿವೃದ್ಧಿಯನ್ನು ಸಾಧಿಸಿ

ಲಕ್ಷಾಂತರ ಸಂಖ್ಯೆಯ ವಿಜೇತ ರೈತರನ್ನು ಸೃಷ್ಟಿಸುವ ಯುಗವನ್ನು ಕೃಷ್-e ಆರಂಭಿಸುತ್ತದೆ

ಭಾರತೀಯ ಕೃಷಿಯನ್ನು ರೂಪಾಂತರಗೊಳಿಸಲು, ತಮ್ಮ ಹೊಲಗಳಿಂದ ಅತ್ಯುತ್ತಮ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಪಡೆದುಕೊಳ್ಳುವಂತೆ ಲಕ್ಷಾಂತರ ರೈತರನ್ನು ಸುಧಾರಿಸುವ ಗುರಿಯನ್ನು ಕೃಷ್-e ಹೊಂದಿದೆ.

ಕೈಲಾಸ್‌ ಮೋರೆ ಗ್ರಾಮ - ಪೂರಿ

ಜಿಲ್ಲೆ - ಔರಂಗಾಬಾದ್

ಓರ್ವ ಕೃಷ್-e ತಾಂತ್ರಿಕತೆ ಪ್ಲಾಟ್‌ ರೈತರಾಗಿರುವ ಶ್ರೀಯುತ ಕೈಲಾಶ್‌ ಮೋರೆ ಇವರು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್‌ ಜಿಲ್ಲೆಯವರಾಗಿದ್ದಾರೆ. 8 ತಿಂಗಳುಗಳ ಹಿಂದೆ, ತಮ್ಮ ಬೆಳೆಗಾಗಿ ಕೃಷ್-e‌ ಕಬ್ಬು ಬೆಳೆಯ ಡಿಜಿಟಲ್‌ ಕ್ಯಾಲೆಂಡರ್‌ ಅನ್ನು ಅವರು ಅಳವಡಿಸಿಕೊಂಡರು. ಕೃಷ್-e ಸಲಹೆ ಮತ್ತು ಆ್ಯಪ್‌ ಸಪೋರ್ಟ್‌ನ ನೆರವಿನೊಂದಿಗೆ, ಪ್ರಸ್ತುತದಲ್ಲಿ, ಅವರ ಕಬ್ಬಿನ ಬೆಳೆಯು 7.5 ಅಂಗುಲಗಳಷ್ಟು ಗಿಣ್ಣುಗಳ ಗಾತ್ರವನ್ನು ಮತ್ತು 3.5 ಅಂಗುಲಗಳಷ್ಟು ದಪ್ಪವನ್ನು ಹೊಂದಿದೆ. ಇದರ ಶ್ರೇಯವು ಉತ್ತಮ ಬೆಳೆ ನಿರ್ವಹಣಾ ಕ್ರಮಗಳಾದಂತಹ ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ ಮುಂತಾದವುಗಳಿಗೆ ಸಲ್ಲುತ್ತದೆ, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಸಾಗುವಳಿ ವೆಚ್ಚದಲ್ಲಿ 12% ಉಳಿತಾಯವನ್ನು ಮಾಡಲು ಅವರಿಗೆ ಇದು ನೆರವಾಗಿದೆ.

ಅಂಕುಶ್‌ ದೊಡ್‌ಮೀಸೆ ಗ್ರಾಮ – ಸಾದೊಬಾಚಿವಾಡಿ ಬಾರಾಮತಿ

ಜಿಲ್ಲೆ - ಪುಣೆ

ಪುಣೆಯ ಸಾದೊಬಾಚಿವಾಡಿ ಬಾರಾಮತಿ ಗ್ರಾಮದವರಾದ ಶ್ರೀ ಅಂಕುಶ್‌ ದೊಡ್‌ಮೀಸೆ ಇವರು ಓರ್ವ ಪ್ರಗತಿಪರ ರೈತರಾಗಿದ್ದು, ತಮ್ಮ ಬೆಳೆಗಳ ಆರೈಕೆಯನ್ನು ಮಾಡಲು ಕೃಷ್-e ಕಬ್ಬಿನ ಬೆಳೆಯ ಡಿಜಿಟಲ್‌ ಸಲಹೆಯನ್ನು ಬಳಸುತ್ತಾರೆ. ಇವರು ನಮ್ಮ ನಿಯತಕಾಲಿಕ ಚಟುವಟಿಕೆ ಗಳಾದಂತಹ  ಭೂಮಿ ಸಿದ್ಧತೆ, ಬೀಜ ಆಯ್ಕೆ, ಬೀಜೋಪಚಾರ, ಹ್ಯೂಮಿಕ್‌ + ಫಾಸ್ಫರಿಕ್‌ ಆಮ್ಲದಿಂದ ಬೇರು ತೊಯ್ಯಿಸುವಿಕೆಗಳಂಥ (ಡ್ರೇನ್ಚಿಂಗ್) ಅನುಸರಿಸುತ್ತಿದ್ದು. ಈ ಎಲ್ಲ ತಾಂತ್ರಿಕತೆಗಳ ನೆರವಿನೊಂದಿಗೆ, ಪ್ರಸ್ತುತದಲ್ಲಿ ಸುಮಾರು 7-8 ರಷ್ಟು ಉತ್ತಮ ಸಂಖ್ಯೆಯ ಮೊಳಕೆಗಳನ್ನು ಅವರು ಪಡೆದುಕೊಂಡಿದ್ದಾರೆ ಅಂದರೆ ಸುಮಾರು 80% ವರೆಗೆ    ಮೊಳಕೆಯೊಡೆಯುವಿಕೆಯನ್ನು ಇದು ಅವರಿಗೆ ನೀಡುತ್ತಿದೆ.

ದಾರಾ ಪ್ರತಾಪ್‌ ಸಿಂಗ್‌ ರಘುಬಂಶಿ ಗ್ರಾಮ - ಗ್ರೆತಿಯಾ

ಜಿಲ್ಲೆ - ಛಿಂದ್ವಾರಾ

ಮಧ್ಯ ಪ್ರದೇಶ ರಾಜ್ಯದ ಛಿಂದ್ವಾರಾ ಜಿಲ್ಲೆಯ ಗ್ರೆತಿಯಾ ತಾಲೂಕು, ಚೌರಾಯಿ ಗ್ರಾಮದವರಾದ ಶ್ರೀ ದಾರಾ ಪ್ರತಾಪ್‌ ಸಿಂಗ್‌ ರಘುಬಂಶಿ ಇವರು ಓರ್ವ ಪ್ರಗತಿಪರ  ರೈತರಾಗಿದ್ದು, ಕೃಷ್‌-e ತಂಡದ ನೆರವಿನೊಂದಿಗೆ ಯಾಂತ್ರೀಕರಣ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ನ್ಯುಮ್ಯಾಟಿಕ್‌ ಪ್ಲ್ಯಾಂಟರ್‌ಗಳನ್ನು ಬಳಸಿರುವುದರಿಂದ ಸರಿಯಾದ ಬಿತ್ತನೆಯ ಆಳ, ಬೀಜದಿಂದ ಬೀಜದ  ನಡುವಿನ ಹಾಗೂ ಸಾಲಿನಿಂದ ಸಾಲಿನ ನಡುವಿನನಿಖರ ಅಂತರವು. ಇದರ ಪರಿಣಾಮವಾಗಿ ಮೊಳಕೆಯೊಡೆಯುವಿಕೆಯ ಸಮಾನವಾಗಿದೆ ಹಾಗೂ ಹೈಬ್ರಿಡ್‌ ಗೋವಿನಜೋಳದ ಬೀಜೋತ್ಪಾದನೆಯ ವೆಚ್ಚಗಳು ಕಡಿಮೆಯಾಗಿವೆ.

ಹೇಮಂತ್‌ ವರ್ಮಾ ಗ್ರಾಮ - ಹತೋಡಾ

ಜಿಲ್ಲೆ - ಛಿಂದ್ವಾರಾ

ಇವರು ಹೇಮಂತ್‌ ವರ್ಮಾ. ಇವರು ಮಧ್ಯ ಪ್ರದೇಶದ ಹತೋಡಾ ಗ್ರಾಮದ ಓರ್ವ ಉತ್ತಮ ಪ್ರಗತಿಪರ  ರೈತರಾಗಿದ್ದಾರೆ. ಕೃಷ್-e ತಂಡದ ನೆರವು ಮತ್ತು ಮಾರ್ಗದರ್ಶನದೊಂದಿಗೆ, ಭೂಮಿ ಸಿದ್ಧತೆ ಹಾಗೂ ಕೊಯ್ಲು ಮಾಡುವಿಕೆಗಳಂಥ ಕೃಷ್-e ಬೇಸಾಯಶಾಸ್ತ್ರದ ಕ್ರಮಗಳನ್ನು ಅವರು ಅಳವಡಿಸಿಕೊಂಡಿದ್ದಾರೆ. ಈ ಕ್ರಮಗಳನ್ನು ಬಳಸಿದುದರಿಂದಾಗಿ ಅವರ ಬೆಳೆಗಳ ಬೆಳವಣಿಗೆಯು ಉತ್ತಮವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹೆಚ್ಚಿನ ಇಳುವರಿಯನ್ನು ಅವರು ನಿರೀಕ್ಷಿಸುತ್ತಿದ್ದಾರೆ.

ಮನೋಜ್‌ಭಾಯಿ ಗಣೇಶ್‌ಭಾಯಿ ಭೇಸದಾದಿಯಾ ಗ್ರಾಮ - ಮೋತಿ ಬಾನುಗಡ್

ಜಿಲ್ಲೆ - ಜಾಮ್‌ನಗರ್

ಆರಂಭದಲ್ಲಿ, ಶ್ರೀ ಮನೋಜ್‌ಭಾಯಿ ಗಣೇಶ್‌ಭಾಯಿ ಭೇಸದಾದಿಯಾರವರು ಸಾಂಪ್ರದಾಯಿಕ ವಿಧಾನಗಳಿಂದ ಜಮೀನಿನ ಸಾಗುವಳಿಯನ್ನು ಮಾಡುತ್ತಿದ್ದರು, ಹರಿ ನೀರಾವರಿ ಪದ್ದತಿಯಿಂದ ಬೆಳೆಗೆ ನೀರು ನೀಡುತ್ತಿದ್ದರು, ರಸಗೊಬ್ಬರಗಳ ನೀಡಿಕೆ ಪ್ರಮಾಣದ ಮೇಲೆ ಹೆಚ್ಚು ನಿಯಂತ್ರಣವಿರುತ್ತಿರಲಿಲ್ಲ, ಹಾಗಾಗಿ ಅವರ ಸಾಗುವಳಿ ವೆಚ್ಚವು ಅಧಿಕವಾಗಿರುತ್ತಿತ್ತು. ಆದರೆ ಅಳವಡಿಸಿಕೊಳ್ಳುವ ಮನೋಭಾವ ಹಾಗೂ ಹೊಸ ಮತ್ತು ವಿನೂತನ  ವಿಧಾನಗಳನ್ನು ಕಲಿಯುವ ಅವರ ಇಚ್ಛೆಯು ತಮಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಗತಿಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿದೆ. ಕೃಷ್-e ತಂಡದ ಸಹಾಯ ಮತ್ತು ಮಾರ್ಗದರ್ಶನದೊಂದಿಗೆ, ಅವರುಎಮ್‌ಐಎಸ್ ಅನ್ನು ಅಳವಡಿಸಿಕೊಂಡಿದ್ದಾರೆ ಹಾಗೂ ಕೃಷ್-e ಯ ಸಹಯೋಗದಲ್ಲಿ ಕೆವಿಕೆ ಬೆಳೆ ಆರೈಕೆ ತಂಡದಿಂದ ಒದಗಿಸಲಾಗುವ ಬೇಸಾಯಶಾಸ್ತ್ರ ಸೇವೆಗಳ ಆದಾರಿತವಾಗಿ ಹತ್ತಿ ಬೆಳೆಯನ್ನೂ ಸಹ ಬೆಳೆಯುತ್ತಾರೆ.

ರಮೇಶ್‌ಭಾಯಿ ಗೋವರ್ಧನ್‌ಭಾಯಿ ಚೊವಟಿಯಾ ಗ್ರಾಮ - ಮೋಟಾ ತಾವರಿಯಾ

ಜಿಲ್ಲೆ - ಜಾಮ್‌ನಗರ್

ಜಮೀನಿನ ಸಾಗುವಳಿಯನ್ನು ಮಾಡಲು ಸಾಂಪ್ರದಾಯಿಕ ವಿಧಾನಗಳು ಹಾಗೂ ನೀರಾವರಿ ಪದ್ಧತಿಗಳನ್ನು ಬಳಸುತ್ತಿದ್ದ ಶ್ರೀ ರಮೇಶ್‌ಭಾಯಿ ಗೋವರ್ಧನ್‌ಭಾಯಿ ಚೊವಟಿಯಾರವರಿಗೆ ರಸಗೊಬ್ಬರಗಳ ನೀಡಿಕೆ ಪ್ರಮಾಣದ ಮೇಲೆ ಹೆಚ್ಚು ನಿಯಂತ್ರಣವಿರುತ್ತಿರಲಿಲ್ಲ, ಹಾಗಾಗಿ ಅವರ ಸಾಗುವಳಿ ವೆಚ್ಚವು ಅಧಿಕವಾಗಿರುತ್ತಿತ್ತು. ಅಲ್ಲದೇ, ಮಳೆ ಮತ್ತು ನೀರಿನ ಮೂಲದ ಕೊರತೆಯಿಂದಾಗಿ ಹತ್ತಿ ಬೆಳೆಯ ಫಸಲು ಅವರ ನಿರೀಕ್ಷೆಗಿಂತ ಕಡಿಮೆಯಾಗಿತ್ತು. ಹತ್ತಿ ಬೆಳೆಯನ್ನು ಹೇಗೆ ಸಾಗುವಳಿ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಜ್ಞಾನವನ್ನು ನೀಡುವ ಮೂಲಕ, ರಸಾಯನಿಕ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಹಲವಾರು ಬಾರಿ ನೀಡುವ ಮೂಲಕ, ಮತ್ತು ಕೃಷ್‌-e ತಂಡವು ಕಾಲಕಾಲಕ್ಕೆ ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುವ ಮೂಲಕ, ತಮ್ಮ ಹತ್ತಿ ಸಾಗುವಳಿ ಮತ್ತು ತಮ್ಮ ಹಣಹೂಡಿಕೆಯ ಪ್ರತಿಫಲ  ಬಗ್ಗೆ ಅವರು ಇಂದು ತುಂಬಾ ಸಂತುಷ್ಟರಾಗಿದ್ದಾರೆ.

ಪೆನುಗಂಟಿ ಪಾಪರಾವ್ ಗ್ರಾಮ - ಯೆಂಡಗಂಟಿ

ಜಿಲ್ಲೆ - ವೆಸ್ಟ್‌ ಗೋದಾವರಿ

ಆಂಧ್ರ ಪ್ರದೇಶದ ಯೆಡಗಂಟಿ ಗ್ರಾಮದವರಾಗಿರುವ ಶ್ರೀ ಪೆನುಗಂಟಿ ಪಾಪರಾವ್ ಇವರು ಪ್ರಗತಿಯನ್ನು ಹೊಂದಬಯಸುವ ರೈತರಾಗಿದ್ದು, ಸುಧಾರಿತ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಕೃಷ್-e ತಂಡದ ನೆರವಿನೊಂದಿಗೆ, ಚಾಪೆ ಮಡಿ ಪದ್ಧತಿಯ ಜೊತೆಯಲ್ಲಿ ತಮ್ಮ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿ ವಿಧಾನಗಳನ್ನು ಯಶಸ್ವಿಯಾಗಿ ಅವರು ಅಳವಡಿಸಿಕೊಂಡಿದ್ದಾರೆ. ಫಲಿತಾಂಶ – ಉತ್ಪಾದಕತೆಯಲ್ಲಿ ಎಕರೆಗೆ 3525 ಕೆಜಿಯಿಂದ ಎಕರೆಗೆ 3750 ಕೆಜಿಗಳವರೆಗಿನ ಹೆಚ್ಚಳ.