ಇಂದು ವಿಜ್ಞಾನ ಎಷ್ಟು ಪ್ರಗತಿ ಹೊಂದಿದೆ ಅಂದರೆ ಮಂಗಳ ಗ್ರಹದಲ್ಲಿ ಆಗುತ್ತಿರುವ ಕ್ಯಾಂಪಿಂಗ್ ನಿಂದ ಹಿಡಿದು
3ಡಿ ಪ್ರಿಂಟಿಂಗ್ ವರೆಗೂ ತಂತ್ರಜ್ಞಾನ ಪ್ರಗತಿ ಹೊಂದಿದೆ, ಪರಿವರ್ತನೆಯ ಒಂದು ಅಲೆ ಪ್ರಪಂಚವನ್ನು
ಬದಲಿಸುತ್ತಿದೆ. ಸಂಪೂರ್ಣ ಜಗತ್ತು ಪ್ರಗತಿ ಹೊಂದಿದರು ಕೂಡ ಕೃಷಿ ಜಗತ್ತು ಮಾತ್ರ ಅರ್ಥಪೂರ್ಣವಾದ ಪರಿವರ್ತನೆಗೆ
ಕಾಯುತ್ತಲೆ ಇದೆ. ಎಷ್ಟು ಉದ್ಯೋಗಗಳನ್ನು ಬದಲಿಸುತ್ತಿರುವ ಆಧುನಿಕ ತಾಂತ್ರಿಕತೆಗಳು ನಮ್ಮ ಭಾರತದ ರೈತರಿಗೆ
ಇಲ್ಲಿಯವರೆಗೂ ಪರಿಚಯವೇ ಆಗಿಲ್ಲ. ಅದಕ್ಕಾಗಿಯೇ ನಾವು ಭಾರತದ ಕೃಷಿಯ ರೂಪ ಬದಲಿಸಲು ಮತ್ತು ನಮ್ಮ ದೇಶ
ಹಾಗು ನಮ್ಮ ರೈತರ ಆಧಾರಕ್ಕಾಗಿ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ದೃಢ ನಿರ್ಧಾರಕ್ಕೆ ಬಂದಿದ್ದೇವೆ. ನಾವು
ಪರಿವರ್ತನೆಯ ಒಂದು ಪರಿಸರಾತ್ಮಕ ತಂತ್ರಜ್ಞಾನವನ್ನು ರಚಿಸಿದ್ದೇವೆ, ಇದನ್ನ ಒಂದು ಮಾಯೆ ಎನ್ನಬಹುದು ಆದರೂ
ಇದರಿಂದ ಬಹಳಷ್ಟು ವಾಸ್ತವಿಕ ಲಾಭಗಳಿವೆ. ಇದನ್ನು ನಾವು 'ಚಮತ್ಕಾರ ಅಲ್ಲ ಇದೊಂದು ಆವಿಷ್ಕಾರ' ಎಂದು
ಹೆಸರಿಟ್ಟಿದ್ದೇವೆ
ಕ್ರಿಶ್ - ಇ ಗೆ ನಿಮಗೆ ಸ್ವಾಗತ| ಲೆಕ್ಕವಿಲ್ಲದಷ್ಟು ಗಂಟೆಗಳು, ಲಕ್ಷಾಂತರ ಕೋಡಗಳು, ಸಾವಿರಾರು ಬ್ಲೂಪ್ರಿಂಟ್,
ಹಾಗೂ ಹಲವಾರು ಪರೀಕ್ಷೆಗಳನ್ನು ಮಾಡಿದ ನಂತರ ನಮಗೆ ಕ್ರಿಶ್ - ಇ ಆಪ್ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ. ಕ್ರಿಶ್ -
ಇ ಆಪ್ ಉಪಯೋಗಿಸಲು ಸುಲಭ, ದಕ್ಷತೆಯಿಂದ ಕೂಡಿದೆ, ಅತ್ಯಾಧುನಿಕ ಮತ್ತು ವೈಜ್ಞಾನಿಕವಾಗಿ ಮಾನ್ಯತೆ
ಹೊಂದಿದೆ. ಇದು ಟೆಕ್ನಾಲಜಿ ಮೇಲೆ ಆಧಾರಿತವಾಗಿದೆ ಆದರೆ ರೈತರ ಜೀವನದಿಂದ ಪ್ರೇರಣೆ ಹೊಂದಿದೆ. ಕ್ರಿಶ್ - ಇ ಆಪ್
ರೈತರ ಅವಶ್ಯಕತೆಗಳನ್ನು ಆಧರಿಸಿ ಪರಿಹಾರ ಮತ್ತು ಸೇವೆಗಳನ್ನು ಒದಗಿಸುತ್ತಿದೆ, ಇದರಿಂದ ರೈತರ ಪ್ರತಿ ಎಕರೆ
ಆದಾಯವನ್ನು ಹೆಚ್ಚಿಸುತ್ತದೆ. ಇದನ್ನು ಕೃಷಿ ಪರಿಸರದ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಮುಖ್ಯವಾಹಿನಿಗೆ ತರಲು
ಮತ್ತು ರೈತರ ಜೀವನವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.